ಅಧ್ಯಾಯ 14: ಗುಣತ್ರಯ ವಿಭಾಗ ಯೋಗ - ಶ್ಲೋಕ 11-13
11-13
ಸರ್ವದ್ವಾರೇಷು ದೇಹೇಽಸ್ಮಿನ್ ಪ್ರಕಾಶ ಉಪಜಾಯತೇ। ಜ್ಞಾನಂ ಯದಾ ತದಾ ವಿದ್ಯಾತ್ ವಿವೃದ್ಧಂ ಸತ್ತ್ವಮಿತ್ಯುತ।। 11।। ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ। ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ।। 12।। ಅಪ್ರಕಾಶೋಽಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ। ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ।। 13।।
ಅನುವಾದ
ಶರೀರದ ಎಲ್ಲಾ ದ್ವಾರಗಳು ಜ್ಞಾನದಿಂದ ಪ್ರಕಾಶಿಸಲ್ಪಟ್ಟಾಗ, ಅದು ಸಾತ್ವಿಕ ಗುಣದ ಅಭಿವ್ಯಕ್ತಿ ಎಂದು ತಿಳಿಯಿರಿ. ರಾಜೋ ಗುಣವು ಮೇಲುಗೈ ಸಾಧಿಸಿದಾಗ, ಓ ಅರ್ಜುನ, ಲೋಭ (ದುರಾಸೆ), ಪ್ರಾಪಂಚಿಕ ಲಾಭಕ್ಕಾಗಿ ಉದ್ಯಮ, ಖಿನ್ನತೆ ಮತ್ತು ಮಮಕಾರ ಹೆಚ್ಚಾಗುತ್ತದೆ. ಓ ಅರ್ಜುನ - ಅಜ್ಞಾನ, ಜಡತ್ವ, ಉದಾಸೀನತೆ ಮತ್ತು ಕಾಮ - ಇವು ತಾಮಸ ಗುಣದ ಮುಖ್ಯ ಲಕ್ಷಣಗಳಾಗಿವೆ.